11/03/2024
ರೈತರ ನೈಜ ಸಂಕಷ್ಟ, ಸಂದಿಗ್ಧಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುವ "ಕ್ಷೇತ್ರಪತಿ" ಚಿತ್ರದ ಬಗ್ಗೆ ಇಂದಿನ ಪ್ರಜಾವಾಣಿಯಲ್ಲಿ ರಘುನಾಥ್ ಚ.ಹ. ಅವರ ಒಂದು ಲೇಖನವಿದೆ. ಆ ಚಿತ್ರಕ್ಕೆ ಬೆಂಗಳೂರು ಚಿತ್ರೋತ್ಸವದಲ್ಲಿ ಪ್ರೇಕ್ಷಕರಿಂದ ದೊರೆತ ಬಹುತೇಕ ತಣ್ಣನೆಯ ಪ್ರತಿಕ್ರಿಯೆಯ ವಿಷಾದದ ದನಿಯಲ್ಲಿ, ರೈತರ ವಸ್ತುಗಳ ಕುರಿತ ಚಿತ್ರಗಳು ಈ ದೇಶಕಾಲದಲ್ಲಿ ಹೇಗೆ ಅವಜ್ಞೆಗೆ ಒಳಗಾಗುತ್ತಿವೆ ಎಂದು ಅವರು ಚರ್ಚಿಸಿದ್ದಾರೆ.
ಈ ಚಿತ್ರೋತ್ಸವದಲ್ಲಿ ತೆರೆಕಂಡ ಎರಡು ಕಥಾಚಿತ್ರಗಳು 'ಕಾಟೇರ' ಮತ್ತು 'ಕ್ಷೇತ್ರಪತಿ'. ತೆರೆಕಾಣದ ಸಾಕ್ಷ್ಯಚಿತ್ರ 'ಕಿಸಾನ್ ಸತ್ಯಾಗ್ರಹ'. ಕ್ಷೇತ್ರಪತಿ ಚಿತ್ರವನ್ನು ಅದು ಕಳೆದ ವರ್ಷ ಬಿಡುಗಡೆಯಾದಾಗಲೇ ನೋಡಿದ್ದೇನೆ. ಕೆಲವು ಪ್ರಶ್ನೆಗಳ ನಡುವೆಯೂ ಅದು ನಿಜಕ್ಕೂ ಗಮನಹರಿಸಬೇಕಾದ ಸಿನೆಮಾ ಆಗಬೇಕಿತ್ತು. ಆದರೆ, ನಮ್ಮ ವಿತರಣ ಮತ್ತು ಪ್ರದರ್ಶನ ವ್ಯವಸ್ಥೆಗಳು ಆ ಸಾಧ್ಯತೆಗಳನ್ನು ಪ್ರೇಕ್ಷಕರಿಗೆ ಮುಟ್ಟಿಸುವುದಿಲ್ಲ. ಒಂದೊಮ್ಮೆ ಮುಟ್ಟಿಸಿದರೂ, ಪ್ರೇಕ್ಷಕರ ಸ್ಪಂದನೆ ಹೇಗಿರುತ್ತಿತ್ತು ಎನ್ನುವುದು ಪ್ರಶ್ನೆಯೇ.
ರಘುನಾಥ್ ಅವರ ಲೇಖನವನ್ನು ಚಿತ್ರೋತ್ಸವದ ವ್ಯಾಪ್ತಿಯಲ್ಲಷ್ಟೇ ನೋಡದೆ, ಚಿತ್ರರಂಗದ ವ್ಯಾಪ್ತಿಗೂ ವಿಸ್ತರಿಸಿ ಓದಬೇಕು.
ಮೊದಲ ಕಾಮೆಂಟಿನಲ್ಲಿ ಲಿಂಕ್ ಇದೆ.