24/04/2026
* #ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, 625 ಅಂಕಗಳಿಗೆ 623 ಅಂಕಗಳನ್ನು ಗಳಿಸಿರುವ ಸುಮೇಧ ಮೌರ್ಯ ಹಾಸನ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಹಾಗೂ ರಾಜ್ಯ ಮಟ್ಟದಲ್ಲಿ ಮೂರನೇ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾನೆ. ಆಲೂರು ತಾಲ್ಲೂಕು, ಬೈರಾಪುರದಲ್ಲಿರುವ ಬೆಥೆಸ್ಥಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾಗಿರುವ ಸುಮೇಧ ಮೌರ್ಯ, ತನ್ನ ಪ್ರತಿಭೆ ಮತ್ತು ಶ್ರಮದ ಮೂಲಕ ಈ ಅಭೂತಪೂರ್ವ ಸಾಧನೆ ಸಾಧನೆ ಮಾಡಿದ್ದಾನೆ. ಆಲೂರು ತಾಲೂಕಿನ ಬಾವಸವಳ್ಳಿ ಗ್ರಾಮದ ಅಂಚೆ ಕಚೇರಿಯಲ್ಲಿ ನೌಕರರಾಗಿರುವ ಶಿವಣ್ಣ ಬಿ.ಆರ್. ಮತ್ತು ಜಯಂತಿ ದಂಪತಿಯ ಪುತ್ರ ಸುಮೇಧ ಮೌರ್ಯ ಗಣಿತ ಹಾಗೂ ವಿಜ್ಞಾನ ವಿಷಯಗಳಲ್ಲಿ 100 ಕ್ಕೆ 99 ಅಂಕ ಗಳಿಸಿದ್ದು, ಉಳಿದ ಎಲ್ಲಾ ವಿಷಯಗಳಲ್ಲಿ ಶೇ.100 ಅಂಕಗಳನ್ನು ಪಡೆದಿದ್ದಾನೆ. ಮಗನ ಈ ಯಶಸ್ಸಿಗೆ ಪೋಷಕರು ಸಂತೋಷ ವ್ಯಕ್ತಪಡಿಸಿದ್ದಾರೆ. ಶಾಲೆಯ ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿ ಕೂಡ ಸುಮೇಧ ಮೌರ್ಯನನ್ನು ಅಭಿನಂದಿಸಿದ್ದಾರೆ.*