Today Hassan

Today Hassan Contact information, map and directions, contact form, opening hours, services, ratings, photos, videos and announcements from Today Hassan, Advertising/Marketing, hassan, Hassan.

* #ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, 625 ಅಂಕಗಳಿಗೆ 623 ಅಂಕಗಳನ್ನು ಗಳಿಸಿರುವ ಸುಮೇಧ ಮೌರ್ಯ ಹಾಸನ ಜಿಲ್ಲೆಗೆ ಪ್ರಥಮ ಸ್ಥ...
24/04/2026

* #ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, 625 ಅಂಕಗಳಿಗೆ 623 ಅಂಕಗಳನ್ನು ಗಳಿಸಿರುವ ಸುಮೇಧ ಮೌರ್ಯ ಹಾಸನ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಹಾಗೂ ರಾಜ್ಯ ಮಟ್ಟದಲ್ಲಿ ಮೂರನೇ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾನೆ. ಆಲೂರು ತಾಲ್ಲೂಕು, ಬೈರಾಪುರದಲ್ಲಿರುವ ಬೆಥೆಸ್ಥಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾಗಿರುವ ಸುಮೇಧ ಮೌರ್ಯ, ತನ್ನ ಪ್ರತಿಭೆ ಮತ್ತು ಶ್ರಮದ ಮೂಲಕ ಈ ಅಭೂತಪೂರ್ವ ಸಾಧನೆ ಸಾಧನೆ ಮಾಡಿದ್ದಾನೆ. ಆಲೂರು ತಾಲೂಕಿನ ಬಾವಸವಳ್ಳಿ ಗ್ರಾಮದ ಅಂಚೆ ಕಚೇರಿಯಲ್ಲಿ ನೌಕರರಾಗಿರುವ ಶಿವಣ್ಣ ಬಿ.ಆರ್. ಮತ್ತು ಜಯಂತಿ ದಂಪತಿಯ ಪುತ್ರ ಸುಮೇಧ ಮೌರ್ಯ ಗಣಿತ ಹಾಗೂ ವಿಜ್ಞಾನ ವಿಷಯಗಳಲ್ಲಿ 100 ಕ್ಕೆ 99 ಅಂಕ ಗಳಿಸಿದ್ದು, ಉಳಿದ ಎಲ್ಲಾ ವಿಷಯಗಳಲ್ಲಿ ಶೇ.100 ಅಂಕಗಳನ್ನು ಪಡೆದಿದ್ದಾನೆ. ಮಗನ ಈ ಯಶಸ್ಸಿಗೆ ಪೋಷಕರು ಸಂತೋಷ ವ್ಯಕ್ತಪಡಿಸಿದ್ದಾರೆ. ಶಾಲೆಯ ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿ ಕೂಡ ಸುಮೇಧ ಮೌರ್ಯನನ್ನು ಅಭಿನಂದಿಸಿದ್ದಾರೆ.*

24/04/2026

* #ಹಾಸನ ಜಿಲ್ಲೆ, ಆಲೂರು ತಾಲ್ಲೂಕಿನ, ದೊಡ್ಡಬೀಕನಹಳ್ಳಿ ಗ್ರಾಮದಲ್ಲಿ ನಡೆದ ಶ್ರೀ ಆಂಜನೇಯಸ್ವಾಮಿ ದೇವಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಪರೋಕ್ಷವಾಗಿ ರಾಜ್ಯ ರಾಜಕೀಯ ಎಂಟ್ರಿ ಹಾಗೂ ಮುಖ್ಯಮಂತ್ರಿ ಆಸೆ ಬಿಚ್ಚಿಟ್ಟ ಕೇಂದ್ರ ಸಚಿವ ಎಚ್.ಡಿ‌.ಕುಮಾರಸ್ವಾಮಿ.*

24/04/2026

* #ಹಾಸನ ಜಿಲ್ಲೆ, ಆಲೂರು ತಾಲ್ಲೂಕಿನ, ದೊಡ್ಡಬೀಕನಹಳ್ಳಿ ಗ್ರಾಮದಲ್ಲಿ ನಡೆದ ಶ್ರೀ ಆಂಜನೇಯಸ್ವಾಮಿ ದೇವಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟ ಮಾಜಿಸಚಿವ ಎಚ್.ಡಿ.ರೇವಣ್ಣ. *

24/04/2026

* #ಹಾಸನ ಜಿಲ್ಲೆ, ಹೊಳೆನರಸೀಪುರ ತಾಲ್ಲೂಕಿನ, ಉದ್ದೂರು ಹೊಸಳ್ಳಿ ಗ್ರಾಮದಲ್ಲಿ ಶ್ರೀ ವೀರಾಂಜನೇಯ ಸ್ವಾಮಿ ನೂತನ ಆಲಯ, ಜೀರ್ಣೋದ್ಧಾರ ಸ್ಥಿರ ಬಿಂಬ ಪ್ರತಿಷ್ಠಾಪನೆ ಮತ್ತು ವಿಮಾನ ಗೋಪುರ ಹಾಗೂ ಕಳಸ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿಸಚಿವ ಎಚ್.ಡಿ.ರೇವಣ್ಣ. *

24/04/2026

* #ಸಚಿವ ಜಮೀರ್ ಅಹಮದ್ ವಿರುದ್ಧ ಕೇಂದ್ರ ಸಚಿವ ಎಚ್.ಡಿ‌.ಕುಮಾರಸ್ವಾಮಿ ಕೆಂಡಾಮಂಡಲ. *

22/04/2026

* #ಮಧ್ಯಪ್ರಾಚ್ಯ ದೇಶಗಳ‌ ಯುದ್ದದ ಬಿಕ್ಕಟ್ಟಿನಿಂದಾಗಿ ಹಾಸನ ಜಿಲ್ಲೆಯಲ್ಲಿ ಗ್ಯಾಸ್ ಸಮಸ್ಯೆ ಮುಂದುವರಿದಿದ್ದು ಅಡುಗೆ ಅನಿಲಕ್ಕಾಗಿ ನೂರಾರು ಜನರು ಬೆಳ್ಳಿಗ್ಗೆಯಿಂದ ಸರತಿ ಸಾಲಿನಲ್ಲಿ ನಿಂತ ಘಟನೆ ಅರಕಲಗೂಡು ತಾಲ್ಲೂಕಿನ, ಬರಗೂರು ಬಳಿಯ ಭಾರತ್ ಗ್ಯಾಸ್ ಏಜೆನ್ಸಿ ಬಳಿ ನಡೆದಿದೆ‌.*

22/04/2026

* #ಬೇಲೂರು ಪಟ್ಟಣದಲ್ಲಿರುವ ಐತಿಹಾಸಿಕ ಶ್ರೀ ಚನ್ನಕೇಶವಸ್ವಾಮಿ ದೇವಾಲಯದ ಮೂಲ ವಿಗ್ರಹವನ್ನು ಇಂದು ಬೆಳಿಗ್ಗೆ ಸೂರ್ಯನ ರಶ್ಮಿ ಸ್ಪರ್ಶಿಸಿತು. ಪ್ರತಿ ವರ್ಷ ಜಾತ್ರಾ ಮಹೋತ್ಸವ ಮುಗಿದ ಬಳಿಕ ಏ.21 ಅಥವಾ ಏ.22 ರಂದು ಶ್ರೀ ಚನ್ನಕೇಶವಸ್ವಾಮಿ ವಿಗ್ರಹದ ಮೇಲೆ ಸೂರ್ಯ ಬೆಳಕು ಬೀಳುತ್ತದೆ. ಇಂದು ಬೆಳಿಗ್ಗೆ 6 ಗಂಟೆ 15 ನಿಮಿಷಕ್ಕೆ ಶ್ರೀ ಚನ್ನಕೇಶವಸ್ವಾಮಿ ಮೂಲ ವಿಗ್ರಹದ ಮೇಲೆ ಸೂರ್ಯನ ರಶ್ಮಿ ಬಿದ್ದಿದ್ದು 6 ಗಂಟೆ 42 ನಿಮಿಷಕ್ಕೆ ಸೂರ್ಯನ ರಶ್ಮಿಗಳು ನವರಂಗ ದ್ವಾರ ದಾಟಿವೆ. ಇದರ ಜೊತೆಯಲ್ಲಿಯೇ ಚನ್ನಕೇಶವಸ್ವಾಮಿ ಮೂಲ ವಿಗ್ರಹದ ಮುಂದೆ ಇರಿಸಿರುವ ಉತ್ಸವ ಮೂರ್ತಿ ಮೇಲು ಸೂರ್ಯನ ರಶ್ಮಿ ಬಿದ್ದಿದೆ. ಮೂರು ವರ್ಷಕ್ಕೊಮ್ಮೆ ಉತ್ಸವಮೂರ್ತಿ ಸೂರ್ಯನ ರಶ್ಮಿ ಮೇಲೆ ಬೀಳುತ್ತದೆ. ಈ ವೇಳೆ ನೂರಾರು ಭಕ್ತರು ಹಾಜರಿದ್ದು ಶ್ರೀಚನ್ನಕೇಶವಸ್ವಾಮಿ ಮೇಲೆ ಬೀಳುವ ಸೂರ್ಯನ ರಶ್ಮಿ ಕಣ್ತುಂಬಿಕೊಂಡರು.*

Address

Hassan
Hassan

Website

Alerts

Be the first to know and let us send you an email when Today Hassan posts news and promotions. Your email address will not be used for any other purpose, and you can unsubscribe at any time.

Share