KA 23

KA 23 ಚಿಕ್ಕೋಡಿ ಲೋಕಸಭೆ ವ್ಯಾಪ್ತಿಯಲ್ಲಿನ ಅಪ್ಡೇಟ್. latest happenings around Chikodi MP constituency
(5)

25/05/2026

ಬೆಳಗಾವಿ ಡಿ ಸಿ ಅವರ ಹಾಡಿನ ವಿಡಿಯೋ ಎಲ್ಲೆಡೆ ವೈರಲ್ .

25/05/2026

ತಟ್ಟೆಹಕ್ಕಲು ನದಿಯಲ್ಲಿ ಘೋರ ದುರಂತ: ಕಪ್ಪೆಚಿಪ್ಪು ತೆಗೆಯಲು ಹೋದ 8 ಜನ ಸಾವು, ಇಬ್ಬರು ನಾಪತ್ತೆ

ಕಾರವಾರ (ಉತ್ತರ ಕನ್ನಡ) ಜಿಲ್ಲೆಯ ಭಟ್ಕಳದ ತಟ್ಟೆಹಕ್ಕಲು ನದಿಯಲ್ಲಿ ಕಪ್ಪೆಚಿಪ್ಪು ತೆಗೆಯಲು ಹೋದವರು ನೀರು ಪಾಲಾಗಿದ್ದಾರೆ. ಕಪ್ಪೆಚಿಪ್ಪು ತೆಗೆಯಲು ಹೋಗಿದ್ದ 14 ಜನರು ನೀರಿನ ಸುಳಿಗೆ ಸಿಲುಕಿದ್ದು, ಈ ಪೈಕಿ ಎಂಟು ಜನ ಸಾವನ್ನಪ್ಪಿದ್ದಾರೆ. ಇನ್ನುಳಿದ ನಾಲ್ವರನ್ನ ರಕ್ಷಣೆ ಮಾಡಲಾಗಿದ್ದು, ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಕಪ್ಪೆ ಚಿಪ್ಪು ತೆಗೆಯಲೆಂದು ಒಟ್ಟು 14 ಜನ ಇಂದು (ಮೇ 24) ಬೆಳಗ್ಗೆ ತಟ್ಟಿಹಕ್ಕಲು ಬಳಿ ನದಿಗೆ ಹೋಗಿದ್ದರು. ಎಲ್ಲರೂ ಕಪ್ಪೆ ಚಿಪ್ಪು ಸಂಗ್ರಹಿಸುತ್ತಿದ್ದ ವೇಳೆ ಏಕಾಏಕಿ ನದಿಯಲ್ಲಿ ನೀರು ಹೆಚ್ಚಾಗಿದ್ದು, ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಎಲ್ಲರೂ ಭಟ್ಕಳದ ಶಿರಾಲಿ ಮೂಲದವರು ಎಂದು ತಿಳಿದು ಬಂದಿದೆ.

8 ಜನ ಸಾವು, ನಾಲ್ವರ ರಕ್ಷಣೆ

ಇನ್ನು 14 ಜನರ ಪೈಕಿ ಎಂಟು ಜನರು ಸಾವನ್ನಪ್ಪಿದ್ದು, ನಾಲ್ವರನ್ನ ರಕ್ಷಣೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಾವನ್ನಪ್ಪಿದ ಎಂಟು ಜನರಲ್ಲಿ ಒರ್ವ ಪುರುಷ 7 ಜನ ಮಹಿಳೆಯರು ಎಂದು ತಿಳಿದುಬಂದಿದ್ದು, ನಾಪತ್ತೆಯಾಗಿರುವ ಇಬ್ಬರ ಪತ್ತೆಗಾಗಿ ಶೋಧಕಾರ್ಯ ಮುಂದುವರೆದಿದೆ.
ಕಪ್ಪೆಚಿಪ್ಪು ತೆಗೆಯಲು ಹೋದ 14 ಜನರ ಪೈಕಿ 8 ಮೃತದೇಹಗಳು ಪತ್ತೆಯಾಗಿದ್ದು, ಮೃತದೇಹಗಳನ್ನ ಭಟ್ಕಳ ತಾಲೂಕು ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ, ಇನ್ನುಳಿದ ಇಬ್ಬರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಭಟ್ಕಳ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳೀಯ ಮೀನುಗಾರರ ಸಹಾಯದಿಂದ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ. ಕಪ್ಪೆಚಿಪ್ಪು ತೆಗೆಯಲು ಹೋದ ಎಲ್ಲರೂ ಭಟ್ಕಳದ ಶಿರಾಲಿ ಮೂಲದವರು ಎಂದು ತಿಳಿದು ಬಂದಿದೆ. ಎಲ್ಲರೂ ಒಂದೇ ಕುಟುಂಬದವರು ಎಂಬ ಮಾಹಿತಿ ಲಭ್ಯವಾಗಿದೆ.

25/05/2026

ಇಂದು ಮತ್ತೆ ಪೆಟ್ರೋಲ್ ಡೀಸೆಲ್ ದರ ಏರಿಕೆ

ಪೆಟ್ರೋಲ್ Rs. 2.83,
ಡೀಸೆಲ್ Rs. 2.81 ಜಾಸ್ತಿ

24/05/2026

ಸಂಕೇಶ್ವರದ ಖ್ಯಾತ ನ್ಯಾಯವಾದಿಗಳಾದ ಸಾಗರ ಪಾಟೀಲ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು... 🤗

24/05/2026

ಹಳ್ಳಿ ಪೋರರ ಕೈಚಳಕಕ್ಕೆ ಬುಕ್ ಆಫ್ ರೆಕಾರ್ಡ್ ಗೌರವ

ಕಾಗವಾಡ: ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೊಳೆ ಗ್ರಾಮದ ಯುವಕರ ತಂಡ ಭಾರತದಲ್ಲೇ ಅತಿ ದೊಡ್ಡ ಡಾ. ಬಿ.ಆರ್. ಅಂಬೇಡ್ಕರ್ ಥ್ರೆಡ್ ಆರ್ಟ್ ನಿರ್ಮಿಸಿ ಹೊಸ ಸಾಧನೆ ಮಾಡಿದೆ. 26 ವರ್ಷದ ವಿನಾಯಕ ಶ್ರೀನಾಥ ಸುತಾರ ನೇತೃತ್ವದ 9 ಸದಸ್ಯರ ತಂಡದ ಈ ಕಲಾಕೃತಿ ಇದೀಗ ಬುಕ್ ಆಫ್ ರೆಕಾರ್ಡ್ ದಾಖಲೆಗೆ ಪಾತ್ರವಾಗಿದೆ.

21x21 ಅಡಿ ಗಾತ್ರದ ಕಬ್ಬಿಣದ ಫ್ರೇಮ್ ಮೇಲೆ 40 ಸಾವಿರ ಮೀಟರ್ ಹತ್ತಿ ದಾರ ಬಳಸಿ ಈ ಬೃಹತ್ ಥ್ರೆಡ್ ಆರ್ಟ್ ನಿರ್ಮಿಸಲಾಗಿದೆ. ಸುಮಾರು ಮೂರು ದಿನಗಳ ಕಾಲ ನಿರಂತರವಾಗಿ ನಡೆದ ಕಾರ್ಯದಲ್ಲಿ 210 ಕೆಜಿ ಕಬ್ಬಿಣ, 300 ಸ್ಕ್ರೂಗಳು ಹಾಗೂ 48 ಮೀಟರ್ ಬಿಳಿ ಹತ್ತಿ ಬಟ್ಟೆ ಬಳಸಲಾಗಿದೆ. ಏಪ್ರಿಲ್ 13ರಂದು ಅಥಣಿ ಅಂಬೇಡ್ಕರ್ ವೃತ್ತದಲ್ಲಿ ಕಲಾಕೃತಿಯನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿತ್ತು.

ಗ್ರಾಮೀಣ ಭಾಗದ ಯುವಕರ ಪ್ರತಿಭೆಗೆ ರಾಜ್ಯದ ವಿವಿಧ ಭಾಗಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

24/05/2026

ನಿನ್ನೆ ಅಥಣಿ ತಾಲೂಕಿನಾದ್ಯಂತ ಬಿರುಗಾಳಿ ಸಮೇತ ಸುರಿದ ಮಳೆ.

ಬಿರುಗಾಳಿ ಅಬ್ಬರಕ್ಕೆ ಧರೆಗೆ ಉರುಳಿದ ಮರಗಳು.

ಅಥಣಿ ಪಟ್ಟಣದಲ್ಲಿ ಐಬಿ ರಸ್ತೆಗೆ ಧರೆಗೆ ಉರುಳಿದ ಗಿಡಮರಗಳು.ವಿದ್ಯುತ ಕಂಬಗಳು.

24/05/2026

ನಿನ್ನೆ ಶಮನೆವಾಡಿಯ ಸಂತೆಯಲ್ಲಿ ಕಳ್ಳರ ಹಾವಳಿ, ಸಿಕ್ಕಿಬಿದ್ದ ಕಳ್ಳರು…

24/05/2026

ಬೇಡಕಿಹಾಳ -ಶಮನೇವಾಡಿ ಪರಿಸರದ ಜೈನ ಸಮಾಜದ ಕಲಾವಿದರಾದ ಶ್ರೀ ಸಚಿನ್ /ನಾಗರಾಜ್ ಅ. ಮಾಲಗತ್ತೆ ಇವರ ವತಿಯಿಂದ ವರೂರ ಕ್ಷೇತ್ರದ ಧಾರ್ಮಿಕ ಶಿಬಿರದ ಮಕ್ಕಳಿಗೆ ಕಲೆಯ ಜೊತೆಗೆ ಜೈನ ಧರ್ಮ ಮತ್ತು ತಮ್ಮ ಕಲೆಯನ್ನು ಗುರು ದೇವ ಶ್ರೀ ಗುರುಕಾಣಿಕೆ ಅರ್ಪಣೆ ಮಾಡಿದ ಅವಿಸ್ಮರಣೀಯ ಕ್ಷಣ.

24/05/2026

ಇಲ್ಲಿನ ರಾಜಕಾರಣಿಗಳ ಪೋಟೋ ಹಿತ್ಲಾಗ್ ಪುಜೆ ಮಾಡ್ರಿ....! ರೈತ ಹೋರಾಟ ವೇದಿಕೆಯಲ್ಲಿ ರೈತನ ಮಗಳ ಖಡಕ್ ಮಾತು.....

23/05/2026

ಹುಕ್ಕೇರಿ ತಾಲೂಕು ಸಂಪೂರ್ಣ ನೀರಾವರಿಗಾಗಿ ನಡೆದ ಹೋರಾಟ ಮುಕ್ತಾಯ.....

23/05/2026

ರೈತ ಹೋರಾಟ ವೇದಿಕೆಗೆ ನೀರಾವರಿ ಎಂ ಡಿ ಆಗಮನ.....

Address

Chikodi
591201

Alerts

Be the first to know and let us send you an email when KA 23 posts news and promotions. Your email address will not be used for any other purpose, and you can unsubscribe at any time.

Contact The Business

Send a message to KA 23:

Share