31/08/2024
ಆತ್ಮೀಯ ನಗರಸಭಾ ಸದಸ್ಯರೆ,
ತಮಗೆಲ್ಲಾ ತಿಳಿದಿರುವಂತೆ ಇನ್ನು ಕೆಲವೇ ದಿನಗಳಲ್ಲಿ ಚಿಂತಾಮಣಿ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಈಗಾಗಲೇ ಎಲ್ಲಾ ಪಕ್ಷಗಳಲ್ಲಿ ಅಧಿಕಾರದ ಚದುರಂಗದಾಟ ಶುರುವಾಗಿದೆ. ಈ ಬಾರಿಯ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ, ಹಿಂದಿಗಿಂತ ಹೆಚ್ಚಾಗಿಯೇ ಆಕಾಂಕ್ಷಿ ಗಳ ಸಂಖ್ಯೆ ದುಪ್ಪಟ್ಟಾಗಿದೆ.
ಆದರೆ ನಾವೆಲ್ಲರೂ ಇಲ್ಲಿ ಅತಿಮುಖ್ಯವಾಗಿ ಗಮನಿಸಬೇಕಾದ ಅಂಶ, ಕಳೆದ ಹತ್ತು ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕಾಣದೇ ನಿಷ್ಪ್ರಯೋಜಕವಾಗಿದ್ದ ಚಿಂತಾಮಣಿ ನಗರಕ್ಕೆ, ಡಾ ಎಂ.ಸಿ ಸುಧಾಕರ್ ರವರ ಗೆಲುವಿನೊಂದಿಗೆ ಅಭಿವೃದ್ಧಿ ಕೆಲಸಗಳಿಗೆ ಶರವೇಗದ ಚಾಲನೆ ಸಿಕ್ಕಿದೆ. ಅನೇಕ ಕಾಮಗಾರಿಗಳು ಈಗಾಗಲೇ ಪ್ರಗತಿಯಲ್ಲಿವೆ.
ಸುಮಾರು 15-20 ವರ್ಷಗಳ ನಂತರ ಸಂಪೂರ್ಣ ಬಹುಮತವಿರುವ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದು, ನಮ್ಮ ಶಾಸಕರಾದ ಡಾ ಎಂ ಸಿ ಸುಧಾಕರ್ ರವರು ಸದರಿ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿ, ಜಿಲ್ಲಾ ಉಸ್ತುವಾರಿಗಳಾಗಿ ಉತ್ತಮ ಸ್ಥಾನ ಅಲಂಕರಿಸಿರುವುದು, ಚಿಂತಾಮಣಿತಾಲ್ಲೂಕಿನ ಸಮಸ್ತ ನಾಗರೀಕರಿಗೆ ಅತ್ಯಂತ ಹೆಮ್ಮೆಯ ವಿಷಯ.
ಮೊದಲಿನಿಂದಲೂ ಅಭಿವೃದ್ಧಿಪರವಾದ ರಾಜಕಾರಣದಲ್ಲಿ ನಂಬಿಕೆ ಇಟ್ಟಿರುವ ನಮ್ಮ ನಾಯಕರಾದ ಡಾ. ಎಂ ಸಿ ಸುಧಾಕರ್ ರವರೊಂದಿಗೆ, ನಗರಸಭೆಯಲ್ಲಿಯೂ ನಮ್ಮದೇ ಪಕ್ಷದ ಅಭ್ಯರ್ಥಿಗಳು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಾಗಿ ಚುನಾಯಿತರಾದರೆ, ಅಭಿವೃದ್ಧಿ ಕೆಲಸಗಳ ನಾಗಾಲೋಟ ಮುಂದುವರೆಯುವುದರಲ್ಲಿ ಯಾವುದೇ ಸಂಶಯವಿಲ್ಲ.
ನಗರ ಪ್ರದೇಶದಲ್ಲಿ ಚುನಾಯಿತರಾಗಿರುವ ನಮ್ಮ ಎಲ್ಲಾ ನಗರಸಭಾ ಸದಸ್ಯರಿಗೆ, ಡಾ. ಎಂ ಸಿ ಸುಧಾಕರ್ ಅಭಿಮಾನಿಗಳಾಗಿ ನಾವು ಕೈಮುಗಿದು ವಿನಂತಿ ಮಾಡಿಕೊಳ್ಳುವುದೇನೆಂದರೆ, ದಯವಿಟ್ಟು ನಿಮ್ಮ ರಾಜಕೀಯಗಳನ್ನು ಮರೆತು ನಮ್ಮ ನಾಯಕರೊಂದಿಗೆ ಕೈಜೋಡಿಸಿ. ನಗರಸಭೆಯಲ್ಲಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವುದು ತಮ್ಮ ಪ್ರಥಮ ಆದ್ಯತೆಯಾಗಿರಬೇಕು.
ಸಣ್ಣ ಪುಟ್ಟ ವೈಮನಸ್ಸುಗಳೇನೇ ಇದ್ದರೂ ದಯವಿಟ್ಟು ಎಲ್ಲವನ್ನು ಮರೆತು ಎಲ್ಲರೂ ಒಗ್ಗಟ್ಟಾಗಿ ನಮ್ಮ ನಾಯಕರೊಂದಿಗೆ ಕೈಜೋಡಿಸಿ. ಅವರ ನಿರ್ಧಾರಕ್ಕೆ ನಿಮ್ಮ ಬೆಂಬಲವಿರಲಿ. ನಮ್ಮ ಒಂದು ಸಣ್ಣ ಸ್ವಾರ್ಥ, ಅಧಿಕಾರದಾಸೆ ನಮ್ಮ ವಿರೋಧಿಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿಸಿ ಕೊಡಬಾರದು. ನಿಮ್ಮ ಸಮಸ್ಯೆಗಳೇನೆ ಇದ್ದರೂ ದಯವಿಟ್ಟು ನಮ್ಮ ನಾಯಕರೊಂದಿಗೆ ಕುಳಿತು ಚರ್ಚಿಸಿ ಬಗೆಹರಿಸಿಕೊಳ್ಳಿ.
ನಾವು ಸ್ವಾರ್ಥಿಗಳಾಗಿ ನಮ್ಮ ನಗರದ ಅಭಿವೃದ್ಧಿಯನ್ನು ಬಲಿಕೊಡುವುದು ಬೇಡ. ಜನ ನಮ್ಮನ್ನು ಆಯ್ಕೆ ಮಾಡಿರುವುದು ಅವರ ಸೇವೆ ಮಾಡಲಿಕ್ಕೆ, ಎಂಬುದನ್ನು ದಯವಿಟ್ಟು ಮರೆಯಬೇಡಿ. ನಮ್ಮ ನಾಯಕರೊಟ್ಟಿಗೆ ನಿಮ್ಮ ಕೈ ಸೇರಿದಾಗ ಮಾತ್ರ ಚಿಂತಾಮಣಿಯಲ್ಲಿ ಅಭೂತಪೂರ್ವ ಬದಲಾವಣೆಗಳು ಸಾಧ್ಯವಾಗುತ್ತವೆ.
ದಯವಿಟ್ಟು ನಿಷ್ಪ್ರಯೋಜಕ, ಹಣಬಲದ ರಾಜಕಾರಣ ಮಾಡುವ, ಅಧಿಕಾರದಾಸೆಗೆ ಎಲ್ಲಿಂದಲೋ ಬಂದು ರಾಜಕೀಯ ಮಾಡುತ್ತಿರುವ ವ್ಯಕ್ತಿಗಳೊಂದಿಗೆ ಕೈಜೋಡಿಸಿ ನಿಮ್ಮ ಆತ್ಮ ವಂಚನೆ ಮಾಡಿಕೊಳ್ಳಬೇಡಿ.
ಎಲ್ಲರೂ ಒಗ್ಗೂಡಿ ಜೊತೆಯಾಗಿ ನಿಂತಾಗಲೇ ನಮಗೆ ಜಯ ಸಾಧ್ಯ.. ತಮ್ಮೆಲ್ಲರಿಗೂ ಒಳ್ಳೆಯದಾಗಲಿ🙏🙏
ಚಿಂತಾಮಣಿ ತಾಲ್ಲೂಕಿನ ಸಮಸ್ತ ಡಾ.ಎಂ.ಸಿ ಸುಧಾಕರ್ ಅಭಿಮಾನಿಗಳ ಪರವಾಗಿ ಚಿಂತಾಮಣಿ ನಗರ ಭಾಗದ ಎಲ್ಲಾ ಸುಧಾಕರ್ ಬೆಂಬಲಿತ ನಗರಸಭಾ ಸದಸ್ಯರಲ್ಲಿ ಕಳಕಳಿಯ ಮನವಿ.