Pai Deepa

Pai Deepa I am into Brand Building , Corporate video Production , Tvc ads, Website Design, Corporate gifting , event etc.

24/05/2026

Reels with my sister Reshma Shenoy

23/05/2026
ಉಡುಪಿ: ಹಿಂದೂ ಮಹಿಳೆಗೆ ನ್ಯಾಯ ನೀಡುವಂತೆ, ಉಪಕರಿಸಿ ಸಹಕರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಅವರಲ್ಲಿ ಇಬ್ಬರು ಮುಸ್...
18/05/2026

ಉಡುಪಿ: ಹಿಂದೂ ಮಹಿಳೆಗೆ ನ್ಯಾಯ ನೀಡುವಂತೆ, ಉಪಕರಿಸಿ ಸಹಕರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಅವರಲ್ಲಿ ಇಬ್ಬರು ಮುಸ್ಲೀಂ ಮಹಿಳೆಯರು ಉಡುಪಿಯ ಲ್ಲಿ ಬೇಡಿಕೊಂಡಿದ್ದ ಘಟನೆಯೀಗ ವಿವಾದಕ್ಕೆ ಕಾರಣವಾಗಿದೆ.ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಅವರ ಉಡುಪಿ ಗೆಸ್ಟ್​ಹೌಸ್​ಗೆ ಶನಿವಾರ (ಮೇ 16) ಹಿಂದೂ ಮಹಿಳೆಯೆಂದು ಉಡುಪಿ ತಾಲೂಕಿನ 80 ಬಡಗಬೆಟ್ಟು ಗ್ರಾಮದ ಗಿರಿಜಾ ಶೆಟ್ಟಿಗಾರ್​ ಎಂಬ ವೃದ್ಧ ವಿಧವೆಯನ್ನು ಬುರ್ಖಾ ಧರಿಸಿದ್ದ ಇಬ್ಬರು ಮುಸ್ಲಿಂ ಮಹಿಳೆಯರು ಕರೆ ತಂದಿದ್ದರು. 'ಇವರು ಹಿಂದೂ ಮಹಿಳೆ. ನಮ್ಮ ನೆರೆಮನೆಯವರು. ಬಡ ಮಹಿಳೆಗೆ ಮಂಜೂರಾಗಿರುವ ನಿವೇಶನ ನೀಡಿ' ಎಂದು ಮನವಿ ಮಾಡಿದ್ದರು. ಬಳಿಕ ಸಚಿವೆ, 'ಇದು ನೋಡಿ ನಮ್ಮ ಭಾರತ. ಹಿಂದೂ ಮಹಿಳೆಯ ಪರವಾಗಿ ಮುಸ್ಲಿಂ ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ. ಉಡುಪಿಯ ಜನರು ಇವರನ್ನು ನೋಡಿ ಕಲಿಯಬೇಕು' ಎಂದಿದ್ದರು.
ಮತಾಂತರಗೊಂಡ ಪುತ್ರಿ?

ಉಸ್ತುವಾರಿ ಸಚಿವೆ ಲಕ್ಷ್ಮೀ, ಘಟನೆಯ ಸತ್ಯಾಸತ್ಯತೆ ತಿಳಿಯದೆ ಉಡುಪಿ ಬಿಜೆಪಿಗರಿಗೆ ಸೌಹಾರ್ದತೆಯ ಬಗ್ಗೆ ಬಿಟ್ಟಿ ಉಪದೇಶ ನೀಡಿದ್ದಾರೆ. ಅವರನ್ನು ಭೇಟಿಯಾಗಲು ಬಂದ ಗಿರಿಜಾ ಶೆಟ್ಟಿಗಾರ್​ ಅವರನ್ನು ಕರೆತಂದಿದ್ದು ಮುಸ್ಲಿಂ ಧರ್ಮಕ್ಕೆ ಮತಾಂತರ ಆಗಿರುವ ಅವರ ಪುತ್ರಿಯೇ. ತಾನು ಹಿಂದೂ ಮಹಿಳೆಯ ನೆರೆಮನೆಯವರು ಎಂದು ಸುಳ್ಳು ಹೇಳಿ ಸಚಿವೆಯನ್ನೇ ಯಾಮಾರಿಸಿದ್ದಾರೆ. ಅವಸರ ಬುದ್ಧಿಯ ಹೆಬ್ಬಾಳ್ಕರ್​, ಹಿಂದೆಮುಂದೆ ಯೋಚಿಸದೆ ನಮಗೆ ಸೌಹಾರ್ದತೆಯ ಪಾಠ ಮಾಡಿದ್ದಾರೆ. ಬೆಳಗಾವಿಯಿಂದ ಬಂದ ಉಸ್ತುವಾರಿ ಸಚಿವೆಯಿಂದ ನಾವು ಸೌಹಾರ್ದತೆಯ ಬಗ್ಗೆ ಕಲಿಯುವ ಅಗತ್ಯವಿಲ್ಲ ಎಂದು ಉಡುಪಿ ನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ನೀತಾ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಸ್ತುವಾರಿ ಸಚಿವರಿಗೇ ಮೋಸ!

ಹಿಜಾಬ್​ ಬುರ್ಖಾ ಧರಿಸಿ ಶಾಲಾ-ಕಾಲೇಜುಗಳಲ್ಲಿ ಶಿಕ್ಷಣ ವ್ಯವಸ್ಥೆಗೆ ಧಕ್ಕೆ ತರಲು ಮುಂದಾಗಿದ್ದ ಕೆಲ ಮುಸ್ಲಿಂ ಮಹಿಳೆಯರು ಇದೀಗ ಜಿಲ್ಲಾ ಉಸ್ತುವಾರಿ ಸಚಿವೆಗೇ ಮೋಸ ಮಾಡಿದ್ದಾರೆ. ಸ್ವಂತ ತಾಯಿಯನ್ನೇ ನೆರೆಮನೆಯ ಮಹಿಳೆ ಎಂದ ಬುರ್ಖಾಧಾರಿಗಳ ಮನಸ್ಥಿತಿಯನ್ನು ಸಮಾಜ ಗಂಭೀರವಾಗಿ ಪರಿಗಣಿಸಬೇಕು. ಅತಿಥಿಯಂತೆ ಜಿಲ್ಲೆಗೆ ಆಗಮಿಸುವ ಹೆಬ್ಬಾಳ್ಕರ್​, ಬಿಟ್ಟಿ ಪ್ರಚಾರದ ತೆವಲಿಗೆ ಬಿಜೆಪಿಯನ್ನು ಟೀಕಿಸುವುದು ಬೇಡ. ಜಿಲ್ಲೆಯ 5 ಬಿಜೆಪಿ ಶಾಸಕರು ಹಾಗೂ ಸಂಸದರು ತಮ್ಮ ಬಳಿ ಸಮಸ್ಯೆ ನಿವಾರಣೆಗೆ ಬರುವ ನಾಗರಿಕರೊಂದಿಗೆ ಎಂದಿಗೂ ಜಾತಿ, ಧರ್ಮದ ಭೇದ-ಭಾವ ತೋರಿಲ್ಲ. ಆದರೆ, ರಾಷ್ಟ್ರ ವಿರೋಧಿಗಳು, ಮತೀಯ ಶಕ್ತಿಗಳ ವಿರುದ್ಧ ಎಂದಿಗೂ ರಾಜಿಯಾಗುವುದಿಲ್ಲ. ಇದನ್ನು ಸಚಿವೆ ಲಕ್ಷ್ಮೀ ಅರ್ಥ ಮಾಡಿಕೊಳ್ಳಲಿ ಎಂದು ನೀತಾ ಪ್ರಭು ಸಲಹೆ ನೀಡಿದ್ದಾರೆ.
"
Neetha PrabhuUdupi NagraMahila Morcha Morcha

On 25/04/2026  At D.C .Office , Manipal .
24/04/2026

On 25/04/2026 At D.C .Office , Manipal .

All about yesterday
13/04/2026

All about yesterday

*ಭಾರತೀಯ ಜನತಾ ಪಾರ್ಟಿ ಉಡುಪಿ ನಗರ* ಮುಂಬರುವ ಚುನಾವಣಾ ಪೂರ್ವ ತಯಾರಿಯಾಗಿ ಕರಂಬಳ್ಳಿ, ಕಡೆ ಕಾರು, ಬಡಗುಬೆಟ್ಟು, ಬೈಲೂರು, ತೆಂಕನಿಡಿಯೂರು ವಾರ್...
07/04/2026

*ಭಾರತೀಯ ಜನತಾ ಪಾರ್ಟಿ ಉಡುಪಿ ನಗರ*
ಮುಂಬರುವ ಚುನಾವಣಾ ಪೂರ್ವ ತಯಾರಿಯಾಗಿ ಕರಂಬಳ್ಳಿ, ಕಡೆ ಕಾರು, ಬಡಗುಬೆಟ್ಟು, ಬೈಲೂರು, ತೆಂಕನಿಡಿಯೂರು ವಾರ್ಡ್ ಗಳಲ್ಲಿ ಬೂತ್ ಅಧ್ಯಕ್ಷರು ಹಾಗೂ ಬಿಎಲ್ಓಗಳ ಗುಂಪು ಸಭೆ ನಡೆಸಲಾಯಿತು ಸಭೆಯಲ್ಲಿ ಹೊಸ ಮತದಾರರ ಸೇರ್ಪಡೆ ಹಾಗೂ ಎಸ್ಐಆರ್ ಬಗ್ಗೆ ಚರ್ಚೆ ನಡೆಸಲಾಯಿತು.

.

06/04/2026

Address

Udupi
576103

Website

Alerts

Be the first to know and let us send you an email when Pai Deepa posts news and promotions. Your email address will not be used for any other purpose, and you can unsubscribe at any time.

Share