Nandi writes

Nandi writes ಬರೆಯುತ್ತಾ ಬದುಕುವವನು..
ಬದುಕಿನ ಕುರಿತೇ ಬರೆಯುವವನು...
ನನ್ನನ್ನು ಸಲಹುತ್ತಿರೋದು
ಭೂಮಾತೆ ಮತ್ತು ಶಾರದೆ ❤🙏

I write - that's my identity 😊

19/05/2026

ಗಂಗೂಲಿ ಬ್ಯಾಟಿಂಗ್ ಹಿಂದಿನ ರಹಸ್ಯಭಾರತದ ಮೋಸ್ಟ್ ಸ್ಟೈಲಿಶ್ ಲೆಫ್ಟ್ ಹ್ಯಾಂಡ್ ಬ್ಯಾಟರ್ ಎನಿಸಿಕೊಂಡವರ ಸಾಲಿನಲ್ಲಿ ಸೌರವ್ ಗಂಗೂಲಿ ನನ್ನ ಪ್ರಕಾರ...
19/05/2026

ಗಂಗೂಲಿ ಬ್ಯಾಟಿಂಗ್ ಹಿಂದಿನ ರಹಸ್ಯ

ಭಾರತದ ಮೋಸ್ಟ್ ಸ್ಟೈಲಿಶ್ ಲೆಫ್ಟ್ ಹ್ಯಾಂಡ್ ಬ್ಯಾಟರ್ ಎನಿಸಿಕೊಂಡವರ ಸಾಲಿನಲ್ಲಿ ಸೌರವ್ ಗಂಗೂಲಿ ನನ್ನ ಪ್ರಕಾರ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಗಂಗೂಲಿ ಪಟಪಟ ಕಣ್ಣುಗಳನ್ನು ಮಿಟುಕಿಸಿ, ಬಾಲ್ ಅನ್ನೇ ದಿಟ್ಟಿಸಿ ಮುನ್ನುಗಿ ಸಿಕ್ಸರ್ ಬಾರಿಸಿದರೆ, ಆತನ ಬಿರುಸಿಗೆ ಬಾಲು ಬಹುತೇಕ ಬಾರಿ ಸ್ಟೇಡಿಯಂ ದಾಟುತ್ತಿತ್ತು. ಸೌರವ್ ಕ್ರಿಕೆಟ್ ಜರ್ನಿಯ ಆರಂಭದ ಹಿಂದೆಯೇ ಒಂದು ಇಂಟರೆಸ್ಟಿಂಗ್ ಫ್ಯಾಕ್ಟ್ ಇದೆ. ಸೌರವ್ ಬಯಸಿ ಬಯಸಿ ಕ್ರಿಕೆಟ್ ಅಂಗಳಕ್ಕೆ ಇಳಿದವರಲ್ಲ. ಸೌರವ್ ಮೂಲತಃ ಫುಟ್ಬಾಲ್ ಪ್ರಿಯ. ಭಾರತದಲ್ಲಿ ಅತಿ ಹೆಚ್ಚು ಪುಟ್ಬಾಲ್ ಕ್ರೇಜ್ ಹೊಂದಿರುವ ಮಹಾನಗರ ಕೋಲ್ಕತ್ತಾ. ಅಲ್ಲಿಯವರೇ ಆದ ಸೌರವ್ ಸಹಜವಾಗಿ ಪುಟ್ಬಾಲ್ ಬಗ್ಗೆ ಒಲವು ಹೊಂದಿದ್ದರು. ಶಾಲಾ ದಿನಗಳಲ್ಲಿ ಪುಟ್ಬಾಲ್ ಆಟಗಾರನಾಗಿಯು ಹೆಸರು ಗಳಿಸಿದ್ದರು. ಸೌರವ್ ಅಣ್ಣ ಸ್ನೇಹಶಿಶ್ ಗಂಗೂಲಿ ಕ್ರಿಕೆಟ್ ಲೋಕದ ಮಿಂಚುವ ಕನಸು ಹೊಂದಿದ್ದರು. ಅದಕ್ಕಾಗಿ ಬಾಲ್ಯದಲ್ಲೇ ಕ್ರಿಕೆಟ್ ಅನ್ನು ಬದುಕಿನ ಭಾಗವಾಗಿಸಿಕೊಂಡಿದ್ದರು. ಅನಂತರದ ದಿನಗಳಲ್ಲಿ ಬಂಗಾಳದಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಆಟನಾಗಿಯು ಹೆಸರು ಗಳಿಸಿದರು. ಆದರೆ ಭಾರತೀಯ ಕ್ರಿಕೆಟ್ ಲೋಕದಲ್ಲಿ ಅವಕಾಶ ಪಡೆಯುವ ಅದೃಷ್ಟ ಅವರಿಗೆ ಇರಲಿಲ್ಲ. ಭಾರತ ಕ್ರಿಕೆಟ್ ಲೋಕದ ಚಹರೆ ಬದಲಿಸುವ ಅವಕಾಶ ಸೌರವ್ ಗಂಗೂಲಿ ಅವರದಾಗಿತ್ತು.‌ ಅದಕ್ಕೆ ಮುನ್ನುಡಿಯಾಗಿದ್ದು ಸ್ನೇಹಶಿಶ್ ತಮ್ಮನಿಗೆ ಕ್ರಿಕೆಟ್ ಆಡುವಂತೆ ಆರಂಭದಲ್ಲಿ ನೀಡಿದ ಸಲಹೆ. ಹೈಸ್ಕೂಲ್ ರಜಾ ದಿನಗಳಲ್ಲಿ ಸೌರವ್ ಅವರಿಗೆ ಕ್ರಿಕೆಟ್ ಆಡುವಂತೆ ಸ್ನೇಹಶಿಶ್ ಸಲಹೆ ನೀಡಿದರು. ಮೂಲತಃ ಬಲಗೈ ಆಟಗಾರನೇ ಆಗಿದ್ದ ಸೌರವ್ ಆ ಸಂದರ್ಭದಲ್ಲಿ ಎಡಗೈ ಬ್ಯಾಟರ್ ಆಗಿ ತರಬೇತಿ ಆರಂಭಿಸಿದರು. ಅದಕ್ಕೆ ಪ್ರಮುಖ ಕಾರಣವಾಗಿದ್ದು ಸ್ನೇಹಶಿಶ್ ಕ್ರಿಕೆಟ್ ಕಿಟ್. ಅದಾಗಲೇ ಪ್ರೊಫೆಷನಲ್ ಕ್ರಿಕೆಟರ್ ಆಗಲು ಶ್ರಮಿಸುತ್ತಿದ್ದ ಸ್ನೇಹಶಿಶ್ ಬಳಿ ಕ್ರಿಕೆಟ್ ಕಿಟ್ ಇತ್ತು. ಸ್ನೇಹಶಿಶ್ ಮೂಲತಃ ಎಡಗೈ ಆಟಗಾರ. ಹಾಗಾಗಿ ಅವರ ಕಿಟ್ ಬಳಸಿ ಅಭ್ಯಾಸ ಆರಂಭಿಸುವ ಹಂತದಲ್ಲಿ ಸೌರವ್ ಸುಮ್ಮನೆ ಟ್ರೈ ಮಾಡುವ ಎಂದು ಎಡಗೈ ಬ್ಯಾಟರ್ ನಂತೆ ಅಭ್ಯಾಸ ಆರಂಭಿಸಿದರು. ಬಲಗೈ ಮತ್ತು ಎಡಗೈ‌ ಆಟಗಾರರು ಬಳಸುವ ಕ್ರಿಕೆಟ್ ಪರಿಕರಗಳಲ್ಲಿ ಸಾಕಷ್ಟು ವ್ಯತ್ಯಾಸ ಇರುತ್ತೆ. ಪ್ಯಾಡ್ ಮತ್ತು ಬ್ಯಾಟ್ ಹಿಡಿಯಲ್ಲಿ ಒಂದಷ್ಟು ಬದಲಾವಣೆಗಳಿರುತ್ತೆ. ಈ ಸಣ್ಣ ಕಾರಣ ಮುಂದೇ ಸೌರವ್ ಗಂಗೂಲಿ ಹೊಸ ಇತಿಹಾಸ ಬರೆಯಲು ಮುನ್ನುಡಿ ಬರೆಯಿತು. ಸಚಿನ್ ಗಂಗೂಲಿ ಎಂಬ ಅದ್ವಿತೀಯ ಒಪನರ್ ಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಕೊಟ್ಟಿತು. ಈ ರೈಟ್ ಅಂಡ್ ಲೆಫ್ಟ್ ಒಪನಿಂಗ್ ಕಾಂಬೋ ಎದುರಾಳಿಗಳ ನಿದ್ದೆಗೆಡಿಸಿತು. ಇವತ್ತಿಗೂ ಜಗತ್ತಿನ ಅತಿ ಶ್ರೇಷ್ಠ ಲೆಫ್ಟ್ ಹ್ಯಾಂಡ್ ಬ್ಯಾಟರ್ ಗಳ ಸಾಲಿನಲ್ಲಿ ಗಂಗೂಲಿ ಎದ್ದು ಕಾಣುತ್ತಾರೆ. ಮತ್ತೊಂದು ಅಚ್ಚರಿಯೆಂದರೆ ಬೌಲಿಂಗ್ ಮಾಡುವಾಗ ಗಂಗೂಲಿ ಬಲಗೈ ಬೌಲರ್ ಆಗಿದ್ದು ಕೂಡ ಇದೇ ಕಾರಣಕ್ಕೆ.. ಮೂಲತಃ ಅವರು ಎಡಗೈ ಆಟಗಾರನಾಗಿರಲಿಲ್ಲ. ಇನ್ನೊಂದು ವಿಚಿತ್ರ ‌ನೋಡಿ ಗಾಡ್ ಆಫ್ ಕ್ರಿಕೆಟ್ ಸಚಿನ್ ಬಲಗೈ ಬ್ಯಾಟರ್ ಆಗಿ ಮಿಂಚಿದ್ರು, ಅವರು ಇಂದಿಗೂ ಬರೆಯೋದು ಎಡಗೈನಲ್ಲಿ, ಬಳಸೋದು ಎಡಗೈ. ಸ್ವಭಾವತಃ ಅವರು Lefty.

ಎಡಗೈಯೋ, ಬಲಗೈಯೋ ಭಾರತದ ಕ್ರಿಕೆಟ್ ಲೋಕದಲ್ಲಿ ದಂತಕಥೆಗಳಾದ ಈ ಇಬ್ಬರಿಗೂ ನಾವು ಎರಡು ಕೈ ಎತ್ತಿ‌ ಮುಗಿಯಬೇಕು.

ಲೇಖನ 👉🏻ಟಿ.ಜಿ.ನಂದೀಶ್, ತೀರ್ಥಹಳ್ಳಿ✍🏻

         ゚viralシ
18/05/2026

゚viralシ

ಸಚಿನ್ ಸಮಯೋಚಿತ ಸಲಹೆಗಳು....*************************************ಸಚಿನ್ ತೆಂಡೂಲ್ಕರ್ ಅಪ್ರತಿಮ ಕ್ರಿಕೆಟ್ ಆಟಗಾರ ಮಾತ್ರವಲ್ಲ. ಅತ್ಯದ್ಭ...
18/05/2026

ಸಚಿನ್ ಸಮಯೋಚಿತ ಸಲಹೆಗಳು....
*************************************

ಸಚಿನ್ ತೆಂಡೂಲ್ಕರ್ ಅಪ್ರತಿಮ ಕ್ರಿಕೆಟ್ ಆಟಗಾರ ಮಾತ್ರವಲ್ಲ. ಅತ್ಯದ್ಭುತ ಚಿಂತಕ ಕೂಡ. ಸಚಿನ್ ಸಮಯೋಚಿತ ಯೋಚನೆಗಳು, ನಿರ್ಧಾರಗಳು ಎಷ್ಟೋ ಗೆಲುವಿಗೆ ಕಾರಣವಾಗಿದೆ. ಆದರೆ ಬೆಳಕಿಗೆ ಬಂದವು ಕೆಲವಷ್ಟೇ. ಧೋನಿಯೊಳಗಿನ ನಾಯಕತ್ವ ಗುಣವನ್ನು ಮೊದಲು ಗುರುತಿಸಿದ್ದೇ ಸಚಿನ್ ಕಂಗಳು ಎಂಬುದು ಅವರ ದೂರದರ್ಶಿತ್ವಕ್ಕೆ ಸಾಕ್ಷಿ. ಇಂತಹ ಸಚಿನ್ ಸಾಧನೆಯ ಜೊತೆಗೆ ಸನ್ನಡತೆಯಿಂದಲೂ ಜನ ಮನ ಗೆದ್ದ ಮಹನೀಯ.

ಸಚಿನ್ ಸಲಹೆಗಳು ಎಷ್ಟೋ ಜನರಿಗೆ ದಾರಿದೀಪವಾಗಿದೆ. ಹಲವರನ್ನು ಬದುಕನ್ನು ತಿದ್ದಿದೆ. ಅಂಥವುಗಳಲ್ಲಿ ಒಂದೆರಡನ್ನು ಇಲ್ಲಿ ದಾಖಲಿಸುತ್ತಿರುವೆ.

ಸಚಿನ್ ತೆಂಡೂಲ್ಕರ್ ಅವರ ಪ್ರೀತಿಪಾತ್ರ ಆಟಗಾರರಲ್ಲೊಬ್ಬರು ಯುವರಾಜ್ ಸಿಂಗ್. ಯುವಿಗೂ ಕೂಡ ಸಚಿನ್ ಆರಾಧ್ಯದೈವ. ಪಾಜಿ ಎಂದೇ ಪ್ರೀತಿಯಿಂದ ಕರೆಯುತ್ತಿದ್ದ ಯುವಿಗೆ ಸಚಿನ್ ಅವರೇ ರೋಲ್ ಮಾಡೆಲ್. ಅವರ ಆಟ ನೋಡುತ್ತಲೇ ಬೆಳೆದ ಯುವಿ ಅವರೊಡನೆ ಆಡಿದ್ದು, ದಾಖಲೆಗಳನ್ನು ಬರೆದದ್ದು ಇವತ್ತಿಗೆ ಇತಿಹಾಸ. ಯುವಿ ಸ್ವಭಾವತಃ ಮುಂಗೋಪಿ. ಕ್ರಿಕೆಟ್ ಟರ್ಮ್ ನಲ್ಲಿ ಹೇಳಬೇಕಂದ್ರೆ ಅಗ್ರೆಸ್ಸಿವ್ ಕ್ರಿಕೆಟರ್. ಆಟದಲ್ಲಿ ಮೊನಚು, ಆತನ ಮಾತಿನಲ್ಲಿಯು ಇತ್ತು. ಎದುರಾಳಿಗಳ ಸ್ಲೆಡ್ಜಿಂಗ್ ಗೆ ಕೆಲವೊಮ್ಮೆ ಬ್ಯಾಟ್ ನಿಂದ, ಇನ್ನು ಕೆಲವೊಮ್ಮೆ ಹರಿತವಾದ ಮಾತಿಂದ ಎದುರೇಟು ಕೊಡುತ್ತಿದ್ದಾತ. ಇಂಥ ಯುವಿ ಹಲವು ಸಂದರ್ಭಗಳಲ್ಲಿ ಒಳ್ಳೆಯ ಆಟ ಆಡುವ ಹೊತ್ತಲ್ಲೇ ವಿಕೆಟ್ ಚೆಲ್ಲಿದಾಗ ತಮ್ಮ frustration ಬ್ಯಾಟ್ ಮೇಲೆ ತೋರಿಸುತ್ತಿದ್ದರು. ಬ್ಯಾಟ್ ಎಸೆಯುವುದು, ಬ್ಯಾಟ್ ಮುರಿಯುವುದು ಅವರ ಕೋಪ ಪ್ರಕಟಿಸುವ ಪರಿಯಾಗಿತ್ತು. ಆಸ್ಟ್ರೇಲಿಯಾ ಪ್ರವಾಸದಲ್ಲೊಮ್ಮೆ ಇದೇ ಘಟನೆ ಪುನರಾವರ್ತನೆಯಾದಾಗ ಸಚಿನ್ ಯುವಿಗೆ ಒಂದು ಮಾತು ಹೇಳಿದರು. Bat is your weapon, respect it. ಅದೇ ನಿನಗೆ ಅನ್ನ, ಹೆಸರು, ಹಣ ಎಲ್ಲವನ್ನು ಗಳಿಸಿ ಕೊಡುತ್ತಿರೋದು. ಅದನ್ನೆಂದು ಅಗೌರವದಿಂದ ನೋಡಬೇಡ ಎಂದರು. ಆ ಬಳಿಕ ಯುವಿ ತಮ್ಮ ನಡವಳಿಕೆಯನ್ನು ಬದಲಿಸಿಕೊಂಡರು. ಸಚಿನ್ ದೊಡ್ಡತನವೇ ಇದಲ್ವಾ... ಸರಿಯಾಗಿ ನೋಡಿದರೆ ಅತಿ ಹೆಚ್ಚು ಬಾರಿ ಶತಕದ ಹೊಸ್ತಿಲಲ್ಲಿ ಅಂಪೈರ್ ಗಳ ತಪ್ಪು ನಿರ್ಣಯಕ್ಕೆ ಬಲಿಯಾದ ಕ್ರಿಕೆಟಿಗ ಅವರು. ಇಂದಿನಂತೆ ಅಂದು ರಿವ್ಯೂ ಚಾನ್ಸ್ ಇದ್ದಿದ್ರೆ ಬಹುಶಃ ಸಚಿನ್ ಶತಕಗಳ ಸಂಖ್ಯೆ ನಿಸ್ಸಂಶಯವಾಗಿ 200 ದಾಟುತ್ತಿತ್ತು.

ಸಚಿನ್ ಅವರ ದೊಡ್ಡತನ ಮತ್ತು ಕ್ರಿಕೆಟ್ ಪ್ರೀತಿಗೆ ಇನ್ನೊಂದು ಉದಾಹರಣೆ ಸಂಜು ಸ್ಯಾಮ್ಸನ್ ಅವರಿಗೆ ನೀಡಿದ ಮಾರ್ಗದರ್ಶನ. ಹೌದು‌ ಪದೇ ಪದೇ ಒಂದಂಕಿ ಮೊತ್ತಕ್ಕೆ ಔಟಾಗುತ್ತ ಕ್ರಿಕೆಟ್ ಕೆರಿಯರ್ ಮುಗಿದೇ ಹೋಯಿತು ಎಂಬ ಹಂತಕ್ಕೆ ತಲುಪಿದ್ದ ಸಂಜು ಸ್ಯಾಮ್ಸನ್ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಸಚಿನ್ ಮೊರೆ ಹೋದರು. ಮುಕ್ತ ಮನಸಿನಿಂದ ಗೈಡ್ ಮಾಡಿದ ಲಿಟ್ಲ್‌ ಮಾಸ್ಟರ್ ಸರಿಸುಮಾರು ಎರಡು ತಿಂಗಳ ಕಾಲ ಸಂಜು ಅವರ ಆಟವನ್ನು ಮಾನಿಟರ್ ಮಾಡಿದರು. ಅವರ ಕ್ರಿಕೆಟ್ ಪ್ರೀತಿ ಎಂಥದ್ದು ಎಂದರೆ ತಮ್ಮ ಮಗನ ಮದುವೆಯ ದಿನವು ಸಂಜುಗೆ ಕರೆ ಮಾಡಿ ಧೈರ್ಯ ತುಂಬಿದ್ದರು. ಅದರ ಫಲವೆಂಬಂತೆ ಸಂಜು ಸ್ಯಾಮ್ಸನ್ ಅತ್ಯುತ್ತಮ ಆಟಕ್ಕೆ ಮರಳಿದ್ದಲ್ಲದೇ ಬ್ಯಾಕ್ ಟು ಬ್ಯಾಕ್ ಶತಕಗಳೊಡನೆ ಮ್ಯಾನ್ ಆಫ್ ದಿ ಟೂರ್ನಮೆಂಟ್ ಆಗಿದ್ದಲ್ಲದೇ, ಭಾರತೀಯರ ಟಿ20 ಚಾಂಪಿಯನ್‌ ಆಗಲು ಕಾರಣವಾದರು.

ಇಂತಹ ಹತ್ತು ಹಲವು ಸಂಗತಿಗಳು ಸಚಿನ್ ಅವರ ಲೆಗಸಿ ಮತ್ತು ಬುದ್ಧಿವಂತಿಕೆಗೆ ನಿದರ್ಶನವಾಗಿದೆ.

ಸಚಿನ್ ಅವರನ್ನು ಆರಾಧಿಸುವವರು ಮತ್ತು ವಿರೋಧಿಸುವವರು ತಲೆದೂಗಲೇಬೇಕಾದ ಇಂತಹ ಮತ್ತಷ್ಟು ವಿಷಯಗಳಿದೆ‌. ಮುಂಬರುವ ಲೇಖನಗಳಲ್ಲಿ ತಿಳಿಸುವೆ.

©ಲೇಖನ👉🏻ಟಿ.ಜಿ.ನಂದೀಶ್, ತೀರ್ಥಹಳ್ಳಿ✍🏻

17/05/2026

17/05/2026

17/05/2026

12/05/2026

12/05/2026

Address

Bangalore

Website

Alerts

Be the first to know and let us send you an email when Nandi writes posts news and promotions. Your email address will not be used for any other purpose, and you can unsubscribe at any time.

Contact The Business

Send a message to Nandi writes:

Share